Slide
Slide
Slide
previous arrow
next arrow

ರೇಸಾರ್ಟ್‌ನಲ್ಲಿ ವೇಶ್ಯಾವಾಟಿಕೆ ; ಇಬ್ಬರು ಆರೋಪಿಗಳ ಬಂಧನ

300x250 AD

ಕುಮಟಾ: ವೇಶ್ಯಾವಾಟಿಕೆ ನಡೆಯುತ್ತಿದ್ದ ರೆಸಾರ್ಟ್ ಮೇಲೆ ದಾಳಿ ನಡೆಸಿದ ಪೊಲೀಸರು, ಇಬ್ಬರನ್ನು ವಶಕ್ಕೆ ಪಡೆದು ಐದು ಜನ ಯುವತಿಯರ ರಕ್ಷಣೆ ಮಾಡಿದ ಘಟನೆ ತಾಲೂಕಿನ ಬಾಡದ ಜೇಷ್ಠಪುರದ ನೇಸರ ರೆಸಾರ್ಟ್‌ನಲ್ಲಿ ನಡೆದಿದೆ.

ನಾಗೇಶ ಶೆಟ್ಟಿ, ಆರೀಪ್ ಮುಲ್ಲ ಬಂಧಿತ ವ್ಯಕ್ತಿಗಳಾಗಿದ್ದು, ಇವರು ಗ್ರಾಹಕರಿಂದ ಪಡೆದ 12 ಸಾವಿರ ರೂ.ಗೂ ಹೆಚ್ಚು ನಗದು, ಮೊಬೈಲ್‌ಗಳು ಹಾಗೂ ಮೆಡಿಕಲ್‌ಗೆ ಸಂಬಂಧಿತ ಕೆಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. 

300x250 AD

ಭಟ್ಕಳ ಡಿ.ವೈ.ಎಸ್.ಪಿ ಶ್ರೀಕಾಂತ್ ನೇತ್ರತ್ವದಲ್ಲಿ ಖಚಿತ ಮಾಹಿತಿ ಪಡೆದು ಈ ಕಾರ್ಯಾಚರಣೆ ನಡೆಸಿದ್ದು ದತ್ತು ಪಟಗಾರ ಎಂಬುವವರ ಮಾಲಕತ್ವದ ನೇಸರ ರೆಸಾರ್ಟ್ ಇದಾಗಿದ್ದು ಈ ಯುವಕರು ವಾಟ್ಸ್ ಅಪ್ ಮೂಲಕ ಯುವತಿಯ ಪೋಟೋಗಳನ್ನು ಕಳುಹಿಸಿ ಗ್ರಾಹಕರನ್ನು ಸೆಳೆಯುತಿದ್ದರು ಎನ್ನಲಾಗಿದೆ. ಘಟನೆ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This
300x250 AD
300x250 AD
300x250 AD
Back to top